Sunday, March 14, 2010

ಹಿಂಗೆ ಒಂದು ಇಮೇಲ್ !!

ಎಲ್ಲೋ ಒಂದು ಕಡೆ ಓದಿದ್ದೆ ...ಜಪಾನ್ ನಲ್ಲಿ ಒಂದೊಂದು ಕಡೆ ಪುನಶ್ಚೇತನ ಸೆಂಟರ್ ಗಳು ಇರುತಂತೆ. ಜನಕ್ಕೆ ತಮ್ಮ ವಿರೋದಿ ಬಗ್ಗೆ ತುಂಬಾ ಕೋಪ ಬಂದಾಗ ಅಲ್ಲಿಗೆ ಹೋಗಿ, ಅಲ್ಲಿ ಇರೋ ಗೊಂಬೆಗೆ ಚೆನ್ನಾಗಿ ಹೊಡೆದು ತಮ್ಮ ಕೋಪ ಕಮ್ಮಿ ಮಾಡಿ ಕೊಳ್ತಾರಂತೆ . ನಂತರ ಎದುರಿಗೆ ತಮ್ಮ ವಿರೋದಿ ಬಂದರು ನಗು ಮುಖದಿಂದ ಮಾತು ಆಡ್ತಾರಂತೆ. ಕೋಪ ಕಮ್ಮಿ ಮಾಡಿಕೊಳ್ಳೋ ವಿದಾನ ಚೆನ್ನಾಗಿ ಇದೆ ಅಲ್ವಾ. ಸರಿ ಮುಂದೆ ಓದಿ ಈಗ...

ನಾನು ಡೆಲ್ಲಿ ಯಲ್ಲಿ ಕೆಲಸ ಮಾಡ್ತ ಇದ್ದ ದಿನಗಳು..ಒಂದು ಪ್ರಾಜೆಕ್ಟ್ ವರ್ಕ್ ಮೇಲೆ ಬೇರೆ ಕಂಪನಿಗೆ ಆರು ತಿಂಗಳ ಮೇಲೆ ಹೋಗಿದ್ದೆ. ನಾನು ಹೋಗುವ ಮೊದಲೇ ನನ್ನ ಇಬ್ರು ಸಹದ್ಯೋಗಿಗಳು ಅಲ್ಲಿ ಇದ್ದರು..ನಾನು ಮೂರನೇ ಯವನಾಗಿ ಹೋಗಿದ್ದೆ. ನಾನು ಅಲ್ಲಿಗೆ ಹೋಗಿ ..ನಂ ರಿಪೋರ್ಟಿಂಗ್ ಮ್ಯಾನೇಜರ್ 'ರಾಹುಲ್' ಗೆ ರಿಪೋರ್ಟ್ ಮಾಡಿಕೊಂಡೆ. ರಾಹುಲ್ ಮೊದಲ ದಿನವೇ ಪ್ರಾಜೆಕ್ಟ್ ಬಗ್ಗೆ ಒಂದು ಓವರ್ ವ್ಯೂ ಕೊಟ್ಟರು. ನಂತರ ನನ್ನ ಇಬ್ರು ಸಹದ್ಯೋಗಿಗಳು ಅನ್ನು ಮದ್ಯಾನ ಊಟ ಟೈಮ್ ನಲ್ಲಿ ಮೀಟ್ ಮಾಡ್ದೆ. ಒಬ್ಬ 'ಸಂದೀಪ್' .. ನೀತಾ ಅನ್ನೋ ಮ್ಯಾನೇಜರಗು ..ಇನ್ನೊಬ್ಬ 'ಗಣೇಶ' ..ಅಮಿತ್ ಶರ್ಮ ಅನ್ನೋ ಪ್ರಾಜೆಕ್ಟ್ ಮ್ಯಾನೇಜರಗೆ ರಿಪೋರ್ಟ್ ಮಾಡ್ಕೊಂಡಿದ್ರು. ಮಾತು ಕತೆ ಎಲ್ಲ ಅದ ಮೇಲೆ ತಿಳಿತು....ನೀತಾ ...ರಾಹುಲ್ ಇಬ್ರು ಪರವಾಗಿಲ್ಲ ..ಆದ್ರೆ...ಅಮಿತ್ ಶರ್ಮ ಸ್ವಲ್ಪ ತರ್ಲೆ ಮ್ಯಾನೇಜರ್ ...ಸ್ವಲ್ಪ ಕಿರಿಕ್ ಜಾಸ್ತಿ ಅಂತ...

ಪಾಪ ನಂ ದೋಸ್ತ್ ಗಣೇಶ್ ನೆ ಯಾಕೋ ಎಲ್ಲ ಕಡೆ ಹಿಂಗೆ ಅಗಥಲ್ಲ ಅಂತ .... ಅವನು ಕಯ್ ಹಿಡಿದ ಪ್ರಾಜೆಕ್ಟ್ ಗಳು ..ಅವನ ಕೆಲಸದಲ್ಲಿ ಒಂದಲ್ಲ ಒಂದು ತೊಂದ್ರೆ ಇರುತ್ಹೆ... ಯಾಕೋ ..ಮತ್ತೆ ಪಾಪ ಅನುಸ್ತು ನಂಗೆ..

ಹಿಂಗೆ ಕೆಲಸ ಶುರು ಆಗಿ ಎರಡು ತಿಂಗಳು ಆಯಿತು. ನಾನು ಮೂರನೇ ಮಹಡಿಲ್ಲಿ ,ಗಣೇಶ್ ಎರಡನೆ ಮಹಡಿಯಲ್ಲಿ, ಸಂದೀಪ್ ಒಂದನೇ ಮಹಡಿಯಲ್ಲಿ ಕೆಲಸ ಮಾಡ್ತಾ ಇದ್ದವು. ನನ್ನ ಇವಿನಿಂಗ್ ಕಾಫಿ ಯಾವಾಗಲು ಗಣೇಶ್ ಜೊತೆ ಆಗದು..ನಾನು ಅವನ ಹತ್ರ ಹೋಗ್ತಾ ಇದ್ದೆ ..ಇಲ್ಲಾ ಅವನೇ ನನ್ನ ಹತ್ರ ಬರ್ತಾ ಇದ್ದ...ಕಾಫಿ ಜೊತೆ ..ಹರಟೆ ಹೊಡ್ದು, ವಾಪಾಸ್ ಕೆಲಸ ಮಡಕೆ ಹೋಗ್ತಾ ಇದ್ದವು..ಇದು ನಮ್ ಡೈಲಿ ರೂಟಿನ್ ಆಗಿತು...

ಹೀಗೆ ಒಂದು ದಿನ ..ಹಿಂಗೆ ಸಮಯ ನಾಲ್ಕು ಗಂಟೆ ಅಗಿತ್ಹು. ಕಾಫಿ ಟೈಮ್ ..ಗಣೇಶ್ ಗೆ 'ಬಾ' ಅಂತ ಚಾಟ್ ಮೆಸೇಜ್ ಕಳ್ಸಿದೆ
. ಅವನು ವಾಪಾಸ್ ' ಬ್ಯುಸಿ' ಅಂತ ಕಳ್ಸಿದ. ಸರಿ ಅಂತ ನಾನೇ ಅವನ ಹತ್ರ ಹೋದೆ...ಅವನು ಒಂದು ಮೇಲ್ ಟೈಪ್ ಮಾಡಿ ಇಟ್ಟಿದ್ದ ..ಯಾಕೋ ಸ್ವಲ್ಪ ಬೇಜಾರ್ ಮೂಡ ನಲ್ಲಿ ಇದ್ದ ಹಂಗೆ ಈತ್ಹು. ಯಾಕೋ ಅಂತ ಕೇಳ್ದೆ ...ಏನು ಹೇಳಲಿಲ್ಲ ....ಏನಾಯ್ತು ಇವಂಗೆ ಅಂತ ಇವನು ಟೈಪ್ ಮಾಡಿದ್ದ ಮೇಲ್ ನೋಡ್ದೆ..ಅದು 'ಅಮಿತ್ ಶರ್ಮ' ಅಂದ್ರೆ ಅವನ ರಿಪೋರ್ಟಿಂಗ್ ಮ್ಯಾನೇಜರ್ ಗೆ ಬರ್ದಿದ್ದು . ಕುತ್ಕೊಂಡು ಓದ್ದೆ.

ನಂತರ ತಿಳಿತು........ಏನು ಅಂದ್ರೆ...'ಅಮಿತ್ ಶರ್ಮ' ಸುಮ್ನೆ ಸುಮ್ನೆ ಗಣೇಶನ ಮೇಲೆ 'ನೀನು ಕೆಲಸ ಸರಿಯಾಗಿ ಮಾಡ್ತಾ ಇಲ್ಲ' ಅಂತ ಕಂಪ್ಲೈಂಟ್ ಮಾಡಿದನಂತೆ..
ಸುಮ್ನೆ ಸುಮ್ನೆ ಹೊಸ ತರ್ಲೆ ಬೇರೆ ಮಾಡ್ತಾ ಇರ್ತಾನೆ .ಇದರಿಂದ ಗಣೇಶ್ ಗೆ ಸಕ್ಕತ ಬೇಜಾರಾಗಿದೆ. ಗಣೇಶ್ ಗೆ , ಅ ರಿಪೋರ್ಟಿಂಗ್ ಮ್ಯಾನೇಜರ್ ಗೆ ಎಲ್ಲ ವಿವರಿಸಿ ಹೇಳಕೆ ಭಯ. ಅವನ ಬಗ್ಗೆ ಕೆಟ್ಟ ಕೋಪ ಬೇರೆ..ಏನು ಮಾಡದು ಅಂತ ತಲೆ ಕೆಟ್ಟು, ಕೊನೆಗೆ ಒಂದು ಇಮೇಲ್ ಬರ್ದಿದ್ದಾನೆ.

ಇಮೇಲ್ ನಲ್ಲಿ ಗಣೇಶ್ ಎಲ್ಲ ವಿವರಿಸಿ ಹೇಳಿದ್ದ...ಪ್ರಾಜೆಕ್ಟ್ ನಲ್ಲಿ ಅದ ತಪ್ಪಿನಲ್ಲಿ ತನ್ನ ಪಾತ್ರ ಸ್ವಲ್ಪನು ಇಲ್ಲ ಅಂತ,. ಮತ್ತೆ ಅವನು ಕೊಡೊ ತೊಂದರೆ ಬಗ್ಗೆ ಎಲ್ಲ ವಿವರಿಸಿದ್ದ, ಇದು ಹೀಗೆ ಮುಂದುವರಿದರೆ ..ನಾನು ಕಂಪನಿ ಬಿಟ್ಟು ಹೋಗುವುದಾಗಿ ಹೇಳಿದ್ದ..ಅಂತು ಇಮೇಲ್ ಚೆನ್ನಾಗಿ ಬರೆದಿದ್ದ...ಅದನ್ನು ' ಅಮಿತ್ ಶರ್ಮ' ಗೆ ಕಲ್ಸದೊಂದು ಬಾಕಿ ಅಸ್ತೆ....

ನಾನು ಅವನ ಇಮೇಲ್ ಓದಿ, ಇಮೇಲ್ ಚೆನ್ನಾಗಿ ಇದೆ ಎಂದು ಹೇಳಿ 'ಅದನ್ನು ಬೇಗ ಕಳಿಸು' ಈದನ್ನು ಓದಿದ ಮೇಲಾದ್ರು ಅವಂಗೆ ಬುದ್ದಿ ಬಂದ್ರೆ ಸರಿ ಹೋಗುತ್ಹೆ ...ನೀನ್ ಟೆನ್ಶನ್ ಎಲ್ಲ ಕಡಮೆ ಅಗುಥೆ ಅಂತೆ ಸಮಾದಾನ ಮಾಡ್ದೆ..

ಣೇಶ್ ಹಂಗೆ ಸುಮ್ನೆ ಕೂತಿದ್ದ...ನಾನು ಮನಸಿನಲ್ಲೇ ...'ಮೇಲ್ ರೆಡಿ ಮಡಿ ಯಾಕೆ ಹಿಂಗೆ ಕುತೋನೆ ..ಅದನ್ನ ಕಳ್ಸಿದ್ ಬಿಟ್ಟು' ಅಂತ ಅನ್ಕೊಂಡು 'ಯಾಕೋ ಮೇಲ್ ಕಲ್ಸೋ ಬೇಗೋ.. ಕಾಫಿ ಕುಡ್ದು ಬರಣ' ಅಂತ ಹೇಳ್ದೆ.

ಅದಕ್ಕೆ ಅವನು ..ಸರಿ ಅಂತ ಹೇಳ್ಬಿಟ್ಟು.. ಮೇಲ್ ಡಿಲೀಟ್ ಮಾಡಿಬಿಟ್ಟು ...ನಡಿ ಕಾಫಿ ಗೆ ಹೋಗಣ ಅಂತ ಹೇಳ್ದಾ..

ನನಗೆ ಫುಲ್ ಶಾಕ್. ಒಂದು ಗಂಟೆ ಇಂದ ಮೇಲ್ ರೆಡಿ ಮಾಡಿ ...ಈಗ ಪೆಕ್ರ ಕಲ್ಸದ್ ಬಿಟ್ಟು ಡಿಲೀಟ್ ಮಾಡಿ ಬಿಟ್ನಲ್ಲ ಅಂಥಾ...

ಗಣೇಶ್ ಕೇಳ್ದೆ ' ಯಾಕೋ ಮೇಲ್ ಡಿಲೀಟ್ ಮಾಡ್ದೆ' ?

ಅದಕ್ಕೆ ಅವನು ' ನೋಡು..ನಾನು ಮೇಲ್ ಅವನಿಗೆ ಕಲ್ಸಬೇಕು ಅಂತ ಬರ್ದಿದಲ್ಲ ...ಅದನ್ನ ನನ್ನ ಸಮಾದಾನಕ್ಕೆ ಬರ್ದಿದ್ದು ..ನಾನು ಅವಂಗೆ ಏನು ಹೇಳ್ಬೇಕು ಅಂತ ಇದ್ದೆ..ಅದನ್ನೆಲ್ಲಾ ಮೇಲ್ ನಲ್ಲಿ ಹೇಳಿ ಆಯಿತು ಅಸ್ಟೆ. ಅವನು ಓದಿದನ ..ಇಲ್ವಾ ಅದು ನಂಗೆ ಬೇಡ..ಆದ್ರೆ..ನಂಗೆ ಏನು ಹೇಳ್ಬೇಕು ಅಂತ ಇದ್ದೆ ಅದನ್ನೆಲ್ಲಾ ಹೊರಗಡೆ ಹಾಕಿದ ಸಮಾದಾನ ಅಸ್ಟೆ..' ನಡಿ ಕಾಫಿ ಗೆ ಹೋಗಣ ಅಂತ ಹೇಳಿ ಮುಂದೆ ನಡೆದ..

ಅರ್ಥ ಆಯಿತಲ್ವಾ ....ನಿಮಗೆ ಯಾರಿಗಾದರು ..ಚೆನ್ನಾಗಿ ಬ್ಯ ಬೇಕು ಅನ್ಸಿ ಹಂಗೆ ಮಾಡಕೆ ಆಗಿಲ್ಲ ಅಂದ್ರೆ...ಅವರನ್ನು ಚೆನ್ನಾಗಿ ಬಯ್ದು ..ಒಂದು ಮೇಲ್ ಬರೀರಿ. ಸ್ವಲ್ಪ ಸಮಾದಾನ ಅದ ಮೇಲೆ..ಅದನ್ನು ಡಿಲೀಟ್ ಮಡಿ ಅಸ್ಟೆ... :)

ಯಾವ ಕಡೆ ?

ಯುಗಾಧಿ ಹಬ್ಬ.. ಬೆಳಗ್ಗೆನೆ ಬೇಗ ಎದ್ದು ...ಸ್ನಾನ ಮಾಡಿ ....ಮನೆ ಬಾಗಿಲಿಗೆ ಹೂವ..ಮಾವಿನ ಸೊಪ್ಪು..ಬೇವಿನ ಸೊಪ್ಪು ಹಾಕಿ..ಅಡಿಗಿಗೆ ಅಮ್ಮನಿಗೆ ಸಹಾಯ ಮಾಡಿ...ಊಟ ಮಾಡಿ..ಕೊನೆಗೆ ಒಂದು ಸಣ್ಣ ನಿದ್ದೆನು ಮಾಡಿ ಆಯಿತು .. ನಿದ್ದೆ ಮುಗಿದ ಮೇಲೆ..ಏನು ಮಾಡ್ಲಿ ... ರಾಘು ಮಾತಾಡ್ಸಿ ಬರನ ಅಂತ ಅವನ ಮನೆಗೆ ಹೊರಟೆ .

ರಾಘು ಮನೆಲೇ ಇದ್ದ..ಅವನ ಅಕ್ಕನ ಎರಡು ಮಕ್ಕಳು ''ರಶ್ಮಿ' ಮತ್ತು 'ಉಜ್ವಲ್' ಇಬ್ರು ಬಂದಿದ್ರು . ಅವರ ಜೊತೆ ಆಟ ಅಡ್ತ ಇದ್ದ. ನಾನು ಹೋದ ಮೇಲೆ ಅ ಎರಡು ಮಕ್ಕಳು ಅವರ ಅಮ್ಮನ ಹತ್ರ ಹೋದವು .. ನಾನು..ರಾಘು ಹಂಗೆ ಹರಟೆ ಹೊಡಿಯಕೆ ಶುರು ಮಾಡ್ಕೊಂಡ್ವು. ಹಿಂಗೆ ಹರಟೆ ಹೊಡಿಬೇಕದ್ರೆ.. 'ಉಜ್ವಲ್' ವಾಪಾಸ್ ಬಂದ.. ಅವನಿಗೆ ಆರು ವರ್ಷ ಅಸ್ಟೆ. ನನಗೆ ನಾಲಿಗೆ ತುರಿಕೆ ಹೆಚ್ಹಾಗಿ..ಅವನ ಜೊತೆ ಕಿಟಲೆ ಮಾತು ಶುರು ಮಾಡ್ದೆ..

ಶಶಿ : ಏನು ಉಜ್ವಲ್ ..ಏನು ಸಮಾಚಾರ...?

ಉಜ್ವಲ್ : ಏನು ಇಲ್ಲ..

ಶಶಿ : ಹೊಸ ಬಟ್ಟೆ ನ ?

ಉಜ್ವಲ್ : ಹೂ...

ಶಶಿ : ನೆನ್ನೆ ನಿಮ್ ಮೇಡಂ ಸಿಕ್ಕಿದ್ರು ...ಅವರು ಹೇಳ್ತಾ ಇದ್ರೂ ...ನೆನ್ನೆ ನೀನು ಸ್ಕೂಲ್ ಗೆ ಹೋಗಿಲ್ಲ ಅಂತ ..ಯಾಕೆ ?

ಉಜ್ವಲ್ : ಓಹ್ ...ನಾನು ನೆನ್ನೆ ಡ್ಯಾಡಿ ಜೊತೆ ಒಂದು ಸಮಾರಂಭಕ್ಕೆ ಹೋಗಿದ್ದೆ.

ಶಶಿ : ಸಮಾರಂಭಕ್ಕೆ ನಾನು ಬಂದಿದ್ದೆ ..ನೀನು ಸಿಕ್ಕೆ ಇಲ್ಲ ಮತ್ತೆ ....?

ಉಜ್ವಲ್.
...ಪೂರ್ವ ದಿಕ್ಕಿನ ಕಡೆ ಕ್ಯೆ ತೋರಿಸಿ ....ನನಗೆ ಕೇಳಿದ ...

ಉಜ್ವಲ್ : ಅಲ್ಲಿ ಇತ್ತಲ್ಲ ..ಅ ಸಮಾರಂಭಕ್ಕ ಬಂದಿದ್ದು ..?

ಶಶಿ : ಊ ...ಅದಕ್ಕೆ ...ಬಂದಿದ್ದು ..ಯಾಕೆ..

ಉಜ್ವಲ್
ಈಗ ... ಪಶ್ಚಿಮ ದಿಕ್ಕಿನ ಕಡೆ ಕ್ಯೆ ತೋರಿಸಿ ....ನನಗೆ ಹೇಳಿದ ...

" ನಾನು ಕಡೆ ಸಮಾರಂಭಕ್ಕೆ ಹೋಗಿರಲಿಲ್ಲ ..ಈ ಕಡೆ ಸಮಾರಂಭಕ್ಕೆ ಹೋಗಿದ್ದೆ.." ಎಂದ ...

ನಾನು ಅಲ್ಲೇ ಸುಸ್ತು ...ಮುಂದೆ ಏನು ಕೇಳಬೇಕು ಅಂತ ಗೊತ್ಹಾಗ್ಲಿಲ್ಲ ...ರಾಘು ಗೆ ಟಾಟಾ ಹೇಳಿ ವಾಪಾಸ್ ಮನೆಗೆ ಬಂದೆ..

Saturday, February 27, 2010

ನಮ್ಮ ಶಿಲ್ಲಾಂಗ್ ಟ್ರಿಪ್...





ಮೊದಲ
ಸಲ ವಿಮಾನ ಪ್ರಯಾಣ . ಫುಲ್ ಖುಷಿ.. ಫ್ರೆಂಡ್ಸ್ ಗೆ ಎಲ್ಲ ನಾವೇ ಫೋನ್ ಮಾಡಿ.. ಅವರು ಬೇಡ ಅಂದ್ರು ..ನಾವು ಮೊದಲ ಸಲ ವಿಮಾನ ದಲ್ಲಿ ಹೋಗ್ತಾ ಇರೋ ವಿಷ್ಯ ಹೇಳಿ ...ಮನೇಲಿ ಅಮ್ಮ...ಪಕ್ಕದ ಮನೆ ಆಂಟಿ ಜೊತೆ...ಊರಿಂದ ಫೋನ್ಮಾಡಿದ ನಮ್ ಸಂಬಂದಿಕರ ಜೊತೆ...ನಮ್ ಹುಡ್ಗ ವಿಮಾನದಲ್ಲಿ ಟ್ರಿಪ್ ಹೋಗ್ತಾ ಇದ್ದಾನೆ ಅಂತ ಹೇಳಿ...ಅವರ ನಮಗೆ ಫೋನ್ಮಾಡಿ ... ವಿಶ್ ಮಾಡಿ..ನಾವು ಹಂಗೆ ಥ್ಯಾಂಕ್ಸ್ ಅಂತ ಹೇಳಿ .....ಅಂತು.. ಹಿಂಗೆ ಶುರು ಆಯಿತು ನಮ್ ಶಿಲ್ಲಾಂಗ್ ಟ್ರಿಪ್.


ನಾವು ಎಲ್ಲಾದರು ಟ್ರಿಪ್ ಗೆ ಹೊರಡಬೇಕು ಅಂತ ತಿರ್ಮಾನಿಸಿದರೆ, ಕಡಿಮೆ ಅಂದ್ರು ೧೦ - ೧೫ ನೋಡಬೇಕಾದ ಸ್ತಳದ ಪ್ಲಾನ್ಹಾಕಿ ,.. ಹೋಗಬೇಕಾದ ಜಾಗದ ಡಿಸೈಡ್ ಮಾಡಿ, ಆಮೇಲೆ ಅದರ ಮೇಲೆ ಒಂದು ಮೇಲ್ ಶುರು ಮಾಡ್ತೀವಿ. ..ಆಮೇಲೆ ನಮ್ ಮ್ಯಾನೇಜರ್ ಗೆ ಪುಸಿ ಹೊಡ್ದು ಬೇಕಾದ ಡೇಟ್ ಗೆ ರಜ ಹಾಕಿ ... ನಮ್ ಬ್ಯಾಗ್ , ಕ್ಯಾಮೆರಾ ರೆಡಿ ಮಾಡ್ಕೊಂಡು ಹೊರಡದು.. ಹಿಂಗೆ ಟ್ರಿಪ್ ಗೆ ಹೋದರೆ ಮಜಾ ಜಾಸ್ತಿ...ಅಲ್ವಾ...

ಏರ್ ಪೋರ್ಟ್ ಗೆ ಬಂದವು..ರಾಹುಲ್..ಪ್ರಿತ ಇನ್ನು ಬಂದಿರಲಿಲ್ಲ ..ನಂದು , ಸಂತೋಷ್ ದು ಊಟ ಆಗಿರಲಿಲ್ಲ...ಹೊಟ್ಟೆ ಸಕ್ಕತ್ ಹಸಿತ ಇತ್ಹು.

ಸಂತೋಷ್ : ಮಗ, ಬಾ ಅವರು ಬರೋದ್ರೋಲ್ಗೆ ಊಟ ಮಾಡಿ ಬರೋಣ..

ಶಶಿ: ಅವರು ಬರಲಿ ..ಒಟ್ಟಿಗೆ ಹೋಗಣ ...ಚೆನ್ನಾಗಿ ತಿನ್ಬೋದು ...ಶೇರ್ ಮಾಡಿದ್ರೆ ..ಬಿಲ್ ಕಡಮೆ ಅಗತ್ಹೆ ...ಹೆಂಗೆ.. :)

ಸಂತೋಷ್ : ಅದು ನಿಜ ಅನ್ನು..

ಹತ್ತು
ನಿಮಿಷದ ಮೇಲೆ..

ಶಶಿ
: ಅಲ್ಲಿ ನೋಡು ...ಇಬ್ರು ಒಟ್ಟಿಗೆ ಬಂದ್ರು ..

ಸಂತೋಷ್ : ಸೂಪರ್ ಲೇ..
ಅಂತು ಟೈಮ್ ಗೆ ಸರಿಯಾಗ್ ಬಂದ್ರು....

ರಾಹುಲ್ : ಅದು ಹಂಗೆ ಮಗ...ಸಾಹೇಬರು ..ಯಾವಾಗಲು ಟೈಮ್ ಗೆ ಸರಿಯಾಗ್ ಬರ್ತಾರೆ .

ಶಶಿ : ತತ್..ಟ್ರಿಪ್ ಗೆ ಮೊದ್ಲೇ ಶುರು ಮಾಡ್ದ ..ಸರಿ..ನಿಮ್ಮದು ಊಟ ಆಯ್ತಾ..

ಪ್ರಿತ : ನಂದು ಇಲ್ಲ..

ರಾಹುಲ್ : ನಂದು ಆಗಿಲ್ಲ ಮಗ..

ಪ್ರಿತ : ಸರಿ...ನಮ್ ಬ್ಯಾಗ್ ನ ಸೆಕ್ಯೂರಿಟಿ ಚಕ್ ಗೆ ಕೊಟ್ಟು ..ಬೋರ್ಡ್ಡಿಂಗ್ ಪಾಸು ತಂಗೋದು..ಆಮೇಲೆ ಊಟಕ್ಕೆಹೋಗೋಣ..ಆಯ್ತಾ..

ಸಂತೋಷ್ : ಸರಿ ..ಪ್ರಿ ..

ಸರಿ... ವಿಮಾನ ನಿಲ್ದಾಣ ದೊಳಗೆ ಪ್ರವೇಶಿಸಿ...ಆಗಲೇ ವಿಮಾನದಲ್ಲಿ ೧-೨ ಸಲ ತಿರುಗಿ ಅನುಭವ ಇರುವ ಪ್ರಿತ ಹಿಂದೆ ಹಳ್ಳಿಹೈದರ ತರ ನಾವುಗಳು ಹಿಂಬಾಲಿಸಿದೆವು ... ನಮ್ ಇಂಡಿಗೋ ವಿಮಾನ ಇದ್ದದು ಮಧ್ಯಾನ ೩.೦೦ ಗಂಟೆ ಗೆ .. ಬೆಂಗಳೂರುನಿಂದ ಕಲ್ಕತ್ತಾ ಗೆ... ವಿಮಾನ ಹೋಗಕೆ ಇನ್ನು ಒಂದುವರೆ ಗಂಟೆ ಸಮಯ ಇತ್ತು .. ನಮ್ ಬ್ಯಾಗ್ ನೆಲ್ಲ ಸೆಕ್ಯೂರಿಟಿ ಚೆಕ್ ಇನ್ಮಾಡ್ಸಿ ...ಕಿಟಕಿ ಸೈಡ್ ಗೆ ಬೋರ್ಡ್ಡಿಂಗ್ ಪಾಸು ತಗೊಂಡ್ ಆಯಿತು... ಮುಂದಿನ ಕಾರ್ಯಕ್ರಮ ...ಊಟ..

ಬೋರ್ಡ್ಡಿಂಗ್ ಪಾಸು ತಗೊಂಡ್ ಅದ ಮೇಲೆ ಹೊರಗಡೆ ಹೋಗೋ ಹಂಗೆ ಇಲ್ಲ..ಹಂಗು ಹೊರಗಡೆ ಹೋದ್ರೆ .ವಾಪಾಸ್ ಬರ ಬೇಕಾದರೆ ಅಲ್ಲಿ ಇರೋ ಪೋಲಿಸ್ ಒಳಗಡೆ ಬಿಟ್ಟಿಲ್ಲ ಅಂದ್ರೆ...ಏನು ಮಾಡದು ..ಸರಿ ...ಏರ್ ಪೋರ್ಟ್ ಒಳಗೆ ಹೋಟೆಲ್ ಅಶೋಕ್ ಇತ್ತು. ಬಿಲ್ ಜಾಸ್ತಿ ಅದ್ರು ಓಕೆ ಅಂತ ..ಅಲ್ಲಿಗೆ ಹೋದೆವು ...

ಶಶಿ: ಲೋ..ಸಂತೋಷ್ ...ಹೋಟೆಲ್ನಲ್ಲಿ ಯಾರು ಇಲ್ಲ ಮಗ.. .ಬೆಳಗೆ ಇಂದ ಈ ಹೋಟೆಲ್ ಗೆ ನಾವೇ ಫಸ್ಟ್ ಇರ್ಬೇಕು..ಅಲ್ವಾ..

ಸಂತೋಷ್ : ನಂಗು ಹಂಗೆ ಅನ್ನುಸ್ತ ಇದೆ ಲೇ.

ಶಶಿ : ಮೆನು ನೋಡನ ..ರೇಟ್ ತುಂಬಾ ಜಾಸ್ತಿ ಇದ್ರೆ..ಸುಮ್ನೆ ನಿರ್ ಕುಡ್ಕೊಂಡು ವಾಪಾಸ್ ಬರನ..ಆಯ್ತಾ..

ರಾಹುಲ್ : ಜಾಸ್ತಿ ಏನು ಇರಲ್ಲ ಮಗ...ಫಸ್ಟ್ ಮೆನು ನೋಡನ
ತಡಿ..

ದಿ ಗ್ರೇಟ್ ..೫ ಸ್ಟಾರ್ ..ಅಶೋಕ್ ಹೋಟೆಲ್ ನ ಒಳಗೆ ಹೋಗಿ ಕುಳಿತೆವು...ನೀಟ್ ಆಗಿ ಡ್ರೆಸ್ ಮಾಡಿಕೊಂಡಿದ್ದ ಒಬ್ಬ ಬಂದು ..ನಾಲ್ಕು ಲೋಟ ನಿರು ತಂದು ಕೊಟ್ಟು ..ಜೊತೆಯಲ್ಲಿ ಮೆನು ಕೊಟ್ಟನು...ಪ್ರಿತ ಮೆನು ತಗೊಂಡ ೨ ನಿಮಿಷ ನೋಡಿ.. ಸಂತೋಷ್ ಗೆಕೊಟ್ಟಳು ..ಸಂತೋಷ್ ನೋಡಿ ..ನನಗೆ ಕೊಟ್ಟನು ..ನಾನು ಓಪನ್ ಮಾಡಿ ನೋಡಿದ್ರೆ ..ಎಲ್ಲ ರೇಟ್ ೩ ಅಂಕಿ ಮೇಲೆ..ತತ್ ಯಾಕಪ್ಪ ಬಂದವು ಇಲ್ಲಿ ಅನ್ನುಸ್ತು...ಕಾಫಿ ,೭೫ ರುಪಾಯಿ ...ಚಹಾ ..೭೫ .ರುಪಾಯಿ...ಇವೆರೆಡರ ರೇಟ್ ಹಿಂಗೆ..ಬೇರೆ ತಿಂಡಿ ರೇಟ್ ಯಾಕೆ ಬಿಡಿ... ಏನು ಮಾಡದು .. ಇವ ಬೇರೆ ನಾವು ಆರ್ಡರ್ ಮಾಡ್ತಿವೆ ಅಂತ ಮುಕ ನೋಡ್ತಾ ಇದ್ದಾನೆ ..ಬರಿ ನಿರ್ ಕುಡಿಯಾಕೆ ಬಂದವು ಅಂತ ಹೆಂಗೆ ಹೇಳದು.....ಒಳ್ಳೆ ..ಮೈಯ ಮೇಲೆ ಇರುವೆ ಬಿಟ್ಟು ಕೊಂಡ ಹಾಗೆ ಆಗಿತು ನಮ್ ಕಥೆ... ಹೋಗ್ಲಿ ಅಂತ ..ಒಂದು ಗೋಬಿ ಮಂಚೂರಿ ..ಒಂದು ಚಹಾ ಆರ್ಡರ್ ಮಾಡಿದೆವು......
ಗೋಬಿ ಗೆ ೧೨೫ ರುಪಾಯಿ..ಚಹಾ ಕೆ ೭೫ ರುಪಾಯ್ ... ಗೋಬಿ ಕೆ ಕೊಟ್ಟ ೧೨೫ ರುಪಾಯಿನಲ್ಲಿ ನಮ್ ಮನೆ ಹತ್ರದ ಗೋಬಿಶಾಪ್ ನಲ್ಲಿ ೧ ವಾರ.. ದಿನ ರಾತ್ರಿ ... ಸಂತೋಷ್ ...ನಾನು ಇಬ್ರು ....ಫುಲ್ ತಟ್ಟೆ ಗೋಬಿ ತಿನ್ ಬೋದಾಗಿತು ...

ಸರಿ..ನಾವು ಆರ್ಡರ್ ಮಾಡಿದ ಗೋಬಿ ..ಚಹಾ ಬಂತು...ನಾವು ನಾಲ್ವರು ಟೇಸ್ಟ್ ಮಾಡಿದೆವು ..ನಿಜ ಹೇಳ್ಬೇಕು ಅಂದ್ರೆ ..ಗೋಬಿ ಮಂಚೂರಿ ಸಕ್ಕತ ಆಗಿಈತು .ಗೋಬಿ ಗೆ ಕೊಟ್ಟ ೧೨೫ ..ಫುಲ್ ಪೈಸ ವಸೂಲ್ ...ಆದ್ರೆ. ಚಹಾ ಮಾತ್ರ ..ಕೆಟ್ಟು ಕೆರ ಹಿಡಿದ ತರ ..ಇತ್ತು ..

ಸರಿ ..ಬಿಲ್ಲು ಕೊಟ್ಟು..ಹೊರಗಡೆ ಬಂದೆವು ...ಟೈಮ್ ನೋಡಿದರೆ ಇನ್ನು ೨. ೦೦ ಇನ್ನು ಒಂದು ಗಂಟೆ ಇದೆ..ಸರಿ ಫ್ಲೈಟ್ಬೋರ್ಡಿಂಗ್ ಶುರು ಆಯ್ತಾ ಅಂತ ನೋಡನ ಅಂತ ಹೋದ್ರೆ ..ನಮ್ ಫ್ಲೈಟ್ ಇನ್ನು ಒಂದು ಗಂಟೆ ಲೇಟ್ ಅಂತ ತಿಳಿತು... ಡೆಲ್ಲಿಇಂದ ಬರಬೇಕಾದ ಇಂಡಿಗೋ ಫ್ಲೈಟ್ ೧ ಗಂಟೆ ಲೇಟ್ ಅಂತೆ...ಅದೇ ಫ್ಲೈಟ್ ಕಲ್ಕತ್ತಾ ಗೆ ಹೋಗದ್ರಿಂದ ನಮಗೆ ಒಂದು ಗಂಟೆಲೇಟ್ ....ಏನು ಕತೆ ನಾವು ಹೊರಟ ಟೈಮ್ ಸರಿ ಇಲ್ಲ ಅನ್ಸತ್ತೆ ಅನ್ಕೊಂಡು ...ಅಲ್ಲೇ ಹೋಗಿ ಲೌಂಗ್ ನಲ್ಲಿ ಕುಳಿತು ಚೆನ್ನಾಗಿ ಹರಟೆಹೊಡೆದೆವು ...

ಅಂತು ನಂ ವಿಮಾನ ಇನ್ನು ಎರಡು ಗಂಟೆ ಲೇಟ್ ಆಗಿ ಬಂತು.. ಅದು ಬಂದಾಗಲೇ ೬ ಗಂಟೆ . ಸರಿ ಬಂದ ತಕ್ಷಣ ಬೋರ್ಡಿಂಗ್ ಸ್ಟಾರ್ಟ್ ಮಾಡಿದರು...ಬಸ್ಸಿನಲ್ಲಿ ವಿಮಾನದ ಹತ್ರ ಕರ್ಕೊಂಡು ಹೋದರು ..

ಮುಂಚೆ ನಾನು ವಿಮಾನನ ತುಂಬಾ ಹತ್ರದಿಂದ ನೋಡಿರಲಿಲ್ಲ...ಬರಿ ಆಕಾಶದ ಮೇಲೆ ಹೋಗಬೇಕಾದ್ರೆ ನೋಡಿದ್ದು ...ಇಲ್ಲಿಮೊದಲ ಸಲ ಹತ್ರದಿಂದ ನೋಡಲು ಅವಕಾಶ ಸಿಕ್ಕಾಗ ... ವಿಮಾನ ಅಂದ್ರೆ ಸಕ್ಕತ್ ದೊಡ್ದು ...ಚಿಕ್ಕ ಬೆಟ್ಟ ಇದ್ದಂಗೆ ಇರುತೆಅಂದುಕೊಂಡಿದ್ದೆ ...ಆದ್ರೆ ಇಲ್ಲಿ ಅಂದ್ರೆ ನಂ ವಿಮಾನ ಸಕ್ಕತ ಚಿಕ್ದು ಅನ್ನಿಸುತ ಇತ್ತು..ಆಮೇಲೆ ಗೊತಾಯ್ತು ...ಡೊಮೆಸ್ಟಿಕ್ ವಿಮಾನಚಿಕ್ದು ....ಇಂಟರ್ನ್ಯಾಷನಲ್ ವಿಮಾನಗಳು ಸಕ್ಕತ್ ದೊಡ್ದು ಅಂಥಾ..

.೦೦ ಗೆ ಬ್ಯಾಂಗಲೋರ್ ಬಿಟ್ಟ ನಂ ವಿಮಾನ ..ಕಲ್ಕತ್ತಾ ಸೇರಿದಾಗ ೯.೧೫ ನಿಮಿಷ...ಅಲ್ಲಿಂದ ನಮ್ಮ ಬ್ಯಾಗ್ ತಗೊಂಡು ಒಂದುಟ್ಯಾಕ್ಸ್ ಬುಕ್ ಮಾಡ್ಕೊಂಡು ..ಪ್ರಿತ ಡ್ಯಾಡಿ ಬುಕ್ ಮಾಡಿದ್ದ ಗೆಸ್ಟ್ ಹೌಸ್ ಹೊರೆಟೆವು ....ಎಲ್ಲರಿಗು ತುಂಬಾ ಹೊಟ್ಟೆ ಹಸಿಥ ಇತ್ತು. ಟೈಮ್ ಬೇರೆ ೧೦. ೩೦ ..ಇನ್ನು ನಾವು ಹೋಗಬೇಕಾದ ಜಾಗ 'ದಕುರಿಯ' ಇನ್ನು ಬಂದ್ರಿಲಿಲ್ಲ..ಟ್ಯಾಕ್ಸ್ ಡ್ರೈವರ್ ಕೇಳುದ್ರೆ ..೧೧ಗಂಟೆ ಮೇಲೆ ಎಲ್ಲ್ಲೂ ಊಟ ಬೇರೆ ಸಿಗಲ್ಲ ಅಂತ ಹೇಳ್ದ.. ಸರಿ ಅಲ್ಲಿ ಒಂದು ದಾಬ ತರ ಇರೋ ಒಂದು ಹೋಟೆಲ್ ಮುಂದೆ ನಿಲ್ಲಿಸಿರೋಟಿ ..ದಾಲ್ ..ಪ್ಯಾಕ್ ಮಾಡ್ಸಿ ..ಅಲ್ಲೇ ..ಸ್ವೀಟ್ ಲಸ್ಸಿ ಟೇಸ್ಟ್ ಮಾಡಿದೆವು ...ಹೊಟ್ಟೆಹಸಿದಿದಕ್ಕೆ ...ಅ ಲಸ್ಸಿ ಸೂಪರ್ ಆಗಿಇತ್ತು... ಸರಿ ..ಮತ್ತೆ ಹೊರೆಟೆವು . ಸರಿಯಾಗಿ ೧೧.೩೦ ಕೆ 'ದಕುರಿಯ' ಜಾಗಕ್ಕೆ ಬಂದೆವು.

ರಾಹುಲ್ : ಪ್ರಿತ..ಮುಂಚೆ ಈ ಗೆಸ್ಟ್ ಹೌಸ್ ಗೆ ಬಂದಿದ್ದ ?

ಪ್ರಿತ :
ಇಲ್ಲ ರಾಹುಲ್...ನಂಗೆ ಡ್ಯಾಡಿ ಹೇಳಿದ್ದರು ..ಇಲ್ಲಿ ಎಲ್ಲೋ ಬರುತ್ತೆ ಅಂತ..

ಶಶಿ : ಡ್ರೈವ್ ಗೆ ಕೇಳು.. ಅವನಿಗೆ ಗೆಸ್ಟ್ ಹೌಸ್ ಅಡ್ರೆಸ್ ಗೊತ್ತ ಅಂತ ..

ಡ್ರೈವ್
ಗೆ ಕೇಳ್ದ್ರೆ ಅವನಿಗೆ ಗೊತ್ತಿಲ್ಲ ...ಬೇರೆ ಜನ ವಿಚಾರಿಸೋಣ ಅಂದ್ರೆ..ಯಾರ ಇಲ್ಲಿ ಸಿಕ್ತ ಇಲ್ಲ ...ರೋಡ್ನಲ್ಲಿ ಜನ ಜನಗಳೇಇಲ್ಲ..ಏನು ಮಾಡದು...?

ಅಲ್ಲಿ ಒಂದು ಅಂಗಡಿ ಇತ್ತು ..ಅದರ ಶಟರ್ ...ಮುಕ್ಕಾಲು ಭಾಗ ಮುಚ್ಚಿತು..ಕಾಲು ಭಾಗ ದಿಂದ ಸ್ವಲ್ಪ್ ಬೆಳಕು ಬರ್ತಾ ಇತ್ತು..

ನಾನು ..ರಾಹುಲ್ ಕಾರ್ ಹತ್ರ ಇದ್ವು..ಸಂತೋಷ್ ಕಾರ್ ಇಂದ ಸ್ವಲ್ಪ ದೂರದಲ್ಲಿ ಡ್ರೈವರ್ ಜೊತೆ ಅಡ್ರೆಸ್ ಹುಡುಕುತ್ತ ಇದ್ದಾ..

ಪ್ರಿತ.. ?

ಅಲ್ಲಿ ಅಂಗಡಿ ಇತ್ತಲ್ಲ ..ಪ್ರಿತ ಅಲ್ಲಿಗೆ ಹೋದಳು.. ನಾನು..ರಾಹುಲ್ ..ನೋಡ್ತಾ ಇದ್ವು ... ಪ್ರಿತ ಅಲ್ಲಿಗೆ ಹೋದವಳೇ ..ತಕ್ಷಣ .. ಅಂಗಡಿಯ ಶಟರ್ ಅನ್ನು ಪೂರ್ತಿ ಮೇಲಕ್ಕೆ ಎಳೆದಳು...

ಒಳಗಡೆ ನೋಡಿದರೆ..ಅದು ಒಂದು ಹೋಟೆಲ್ ..ಮದ್ದ್ಯಒಂದು ಟೇಬಲ್ ಮೇಲೆ ಜನ .. ಬಿಯರ್ ಬಾಟಲಿ ... ಲೋಟ ..

ಪ್ರಿತ ಅವರ ಮುಕ ನೋಡ್ತಾ ಇದ್ದಾಳೆ ...ಅವರು ಜನ ಪ್ರಿತ ಮುಕ ನೋಡ್ತಾ ಇದ್ದಾರೆ..

ಸಂದರ್ಭ ಹೆಂಗೆ ಇತ್ತು ಅಂದ್ರೆ...ನೀವು ರಾಜಕುಮಾರ್ ಮಾಡಿರೋ ' ಗೋವಾದಲ್ಲಿ ಏಜೆಂಟ್ ೯೯೯' ಫಿಲಂ ನೋಡಿದಿರಾ...ಅದರಲ್ಲಿ ...ಹಿಂಗೆ ನಾಕು ಜನ ವಿಲನ್ ಗಳು ಬಾರ್ ನಲ್ಲಿ ಶಟರ್ ಹಾಕೊಂಡು ವಿಸ್ಕಿ ಕುಡಿತ ಇರ್ತಾರೆ...ರಾಜ್ ಕುಮಾರ್ ..ಹೀರೋ ತರ ಎಂಟ್ರಿ ಕೊಟ್ಟು ..ಶಟರ್ ಮೇಲೆ ಎಳೆದು ..ಆಮೇಲೆ ಫುಲ್ ಬ್ಲಾಸ್ಟ್ ...

ಪ್ರಿತ ಹಂಗೆ ನೋಡ್ತಾನೆ ಇದ್ದಾಳೆ ..ಏನು ಕೇಳ್ತಾನು ಇಲ್ಲ ...ಸುಮ್ನೆ ಹಂಗೆ ನೋಡ್ತಾ ಇದ್ದಾಳೆ..

ನಾಲ್ಕು ಜನಕ್ಕೆ ಫುಲ್ ಶಾಕ್ ...ರಾತ್ರಿ ೧೧.೪೦ ರಲ್ಲಿ ಒಂದು ಹುಡುಗಿ ಬಂದು ನಂ ಹೋಟೆಲ್ ಶಟರ್ ತೆಗದು ಪೋಸ್ ಕೊಡ್ತಾ ಇದ್ದಾಳೆ ...'ಕಾಲ ಕೆಟ್ಟು ಹೋಯ್ತು' ಅಂಥ ಮನಸಲ್ಲೇ ಅಂದುಕೊಂಡು ..ಪಾಪ ಎಲ್ಲರು .. ೪೪೦ ವೋಲ್ಟ್ ಕರೆಂಟ್ ಹೊಡ್ಸ್ಕಂಡುರೋ ತರ ಕುತೋರೆ ..

ನನಗೆ, ರಾಹುಲ್ ಗೆ, ಸಂತೋಷ್ ಗೆ ..ಗಾಬರಿ...ಜೊತೆಗೆ ಫುಲ್ ನಗು..ಮುಂದೆ ಏನು ಅಂಥಾ..

ಅಂತು ಪ್ರಿತ ನೆ ಕೊನೆಗೆ ಅವರನ್ನೇ ಅಡ್ರೆಸ್ ಎಲ್ಲಿ ಅಂತ ಕೆಳುದ್ಲು ...

ರೂಂ ಬುಕ್ ಮಾಡಿದ ಗೆಸ್ಟ್ ಹೌಸ್ ಅ ಹೋಟೆಲ್ ಪಕ್ಕದ ಅಂಗಡಿಯ ಮೇಲೆ ಇತ್ತು ..ಸರಿ..ರೂಂ ಗೆ ಹೋಗಿ ಊಟ ಮಾಡಿಈದನ್ನೇ ನೆನಸ್ಕೊಂಡು ಚೆನ್ನಾಗಿ ನಕ್ಕಿ ನಕ್ಕಿ ..ಸುಸ್ತಾಗಿ ..ಆಮೇಲೆ ನಿದ್ದೆ ಮಾಡಿದೆವು ....

ಅಂತು ಈ ಘಟನೆ ...ನಮ್ಮ ಮನಸಿನಲ್ಲಿ ಸಾದಾ ಕಾಲ ಇರುವಂಗೆ ಮಾಡಿತು... :)

Wednesday, January 20, 2010

ಏನಪ್ಪಾ ಅಂದ್ರೆ....

ನಮ್ಮ ಮನೇಲಿ..

ನಾಳಿದ್ದು ನೆಟ್ವರ್ಕ್ ಪರೀಕ್ಷೆ ಇದೆ..ಏನು ಓದಿಲ್ಲಾ..ಟಿವಿ ನೋಡಕು ಮೂಡ್ ಇಲ್ಲ..ಹೊರಗಡೆ ಹೋಗಾಕು ಮೂಡ್ ಇಲ್ಲ..ಊಟ ಮಾಡಕು ಮೂಡ್ ಇಲ್ಲ...ಥತ್... ಕೂತ್ಕಂಡು ಓದನ ಅಂದ್ರೆ ಆದಕ್ಕೂ ಮೂಡ್ ಇಲ್ಲಾ. ..ಪರೀಕ್ಷೆ ಲಿ ಏನು ಬರಿಯದು...ಅಂತ..ಏನಪ್ಪಾ ಮಾಡದು ಈಗ....

ಅಮ್ಮ : ಶಶಿ...ಸಂತೋಷ್ ಬಂದ ನೋಡು..


ಶಶಿ : ಸರಿ ... ನೋಡ್ತಿನಿ ..

ಶಶಿ : ಬಾ ಮಗ..ಫುಲ್ ಮುಗಿತ ಓದಿ ...

ಸಂತೋಷ್ : ಇಲ್ಲ ಲೇ ಇನ್ನು ಸ್ಟಾರ್ಟ್ಮಾಡಿಲ್ಲ ...

ಶಶಿ: ಯಾಕೋ..

ಸಂತೋಷ್ : ಏನು ಮಾಡದು ಮಗ..ಓದಾಕೆ ಮೂಡ್ ಇಲ್ಲ.ಲೇ..ಸೆಲ್ ನಲ್ಲಿ ಅರ್ಚನ ಜೊತ ಚಾಟ್ ಮಾಡ್ಕೊಂಡು ಕೂತಿದೆ.. ಈಗ ಓದ ಬೇಕು ಮಗ..

ಶಶಿ: ಯಾರದಾದರು ನೋಟ್ಸ್ ಸಿಗುತ್ಹ...

ಸಂತೋಷ್ : ನೋಡ್ಬೇಕು...ಮಧು ಹತ್ರ ಹೋಗಣ ಬಾ... ನೋಟ್ ಮಾಡ್ತಾ ಇರ್ತಾನೆ ..ಹಂಗೆ ಏನಾದ್ರು ಮಾಡಿದ್ರೆ ತಗೊಂಡು ಜೆರೊಕ್ಷ್ ಮಾಡ್ಸನ.ನಡಿ..ನಿನ್ ಹೀರೋ ಪುಚ್ ಸ್ಟಾರ್ಟ್ ಮಾಡು..

ಶಶಿ: ಸರಿ ಮಗ..ನೋಡವ ನಡಿ..

ಮಧು ಮನೇಲಿ...

ಮಧು : ಓಹ್ ...ಏನಪ್ಪಾ ..ಇಬ್ರು ಓದಿ ಮುಗ್ಸಿ ಊರ್ ತಿರುಗುತ ಇದಿರಾ...

ಸಂತೋಷ್ : ಹೂ ..ಮಗ.ನಿನ್ನು ಕರ್ಕೊಂಡು ಹೋಗವ ಅಂತ ಬಂದ್ವಿ..ನಡಿ ..

ಮಧು: ಯಾಕೆ..ಬಂದ್ ಬಗ್ ಬಿಡು.....

ಸಂತೋಷ್ : ಸರಿ..ಮಗ..ಎಷ್ಟು ನೋಟ್ಸ್ ರೆಡಿ ಮಾಡ್ದೆ..

ಮಧು : 3 ಪಾಠ ಆಯಿತು ಮಗ...

ಸಂತೋಷ್ : ಸರಿ ಜೆರೊಕ್ಷ್ ಮಾಡಿಸಿ ತಂದು ಕೊಡ್ತಿವೆ .ರೆಡಿ ಆಗಿರೋ ನೋಟ್ಸ್ ಕೊಡು ..ಮಿಕಿದು ರೆಡಿ ಮಾಡು..ಆಮೇಲೆ ಬಂದು ತಗೊಂಡು ಹೋಗ್ತಿವೆ..


ಮಧು : ತಗೋ ಒಂದೇ ಪೇಜ್..ಬರಿ ಬೇಕಾದ ಪಾಯಿಂಟ್ಸ್ ಇದೆ..

ಶಶಿ : ತೂ..ಲೇ..ಬರಿ ಒಂದು ಪೇಜ್ ನೋಟ್ಸ್ ಗೆ ಇಲ್ಲಿ ತನಕ ಬಂದವ ...ಅದು ಬರಿ ಒಂದೇ ಸೈಡ್ ಬರ್ದಿದಿಯಲ್ಲೋ ..

ಸಂತೋಷ್ : ಬರಿ ಪಾಯಿಂಟ್ಸ್ ಬರ್ದಿದಾನೆ..ಸದ್ಯಕೆ ಇದದ್ರೂ ಇರ್ಲಿ.ನಡಿ ಮಗ..ಜೆರೊಕ್ಷ್ ಮಾಡ್ಸನ.. ಇದನ್ನೇ..

ಜೆರೊಕ್ಷ್ ಅಂಗಡಿಲಿ..

ಶಶಿ: ಜೆರೊಕ್ಷ್ ಮಾಡಿ ಕೊಡಿ ...

ಜೆರೊಕ್ಷ್ ಅಂಗಡಿ ಹುಡುಗಿ : ಎಷ್ಟು ಕಾಪಿ ..

ಶಶಿ: ೨ ಕಾಪಿ

ಜೆರೊಕ್ಷ್ ಅಂಗಡಿ ಹುಡುಗಿ : ಪೇಜ್ ಹಿಂದೆ ನು ಮಾಡಬೇಕ..?

ಇಲ್ಲೇ ನೋಡಿ..ನನಗೆ.. ಸಂತೋಷ್ ಗೆ ಗಾಬರಿ ಅಗಿದು...ಒಬ್ರುಗೊಬ್ರು ಮುಕ ಮುಕ ನೋಡ್ ಕಂಡವು...ಯಾಕೆ ಅಂದ್ರೆ.. ಆ ೧ ಪೇಜ್ ಹಿಂದೆ ಏನು ಇಲ್ಲ..ಖಾಲಿ ಪೇಪರ್ ಅದು..ಅದನ್ನು ಜೆರೊಕ್ಷ್ ಮಾಡಲ ಅಂತ ಕೇಳ್ತಾ ಇದ್ದಾಳೆ... ಏನಾದ್ರು ಜೋಕ್ ಮಾಡ್ತಾ ಇದ್ದಾಳೆ...ಇಲ್ಲ ಸುಮ್ನೆ ಕೇಳ್ತಾ ಇದ್ದಾಳೆ...ಏನು ಗೊಥಯ್ಥ ಇಲ್ವಾ ....



ಶಶಿ : ಬೇಡ...ಒಂದೇ ಸೈಡ್ ಜೆರೊಕ್ಷ್ ಮಾಡಿ ..ಸಾಕು..

ಜೆರೊಕ್ಷ್ ಅಂಗಡಿ ಹುಡುಗಿ : ಸರಿ...


ಸಂತೋಷ್..ನಾನು .. ...ಜೆರೊಕ್ಷ್ ಗೆ ೧ ರೂಪಾಯಿ ಆಯಿತು .. ..ಕಾಸು ಕೊಟ್ಟು ...ಮನೆಗೆ ವಾಪಾಸ್ ಬಂದವು ...


ಏನಪ್ಪ ಅಂದ್ರೆ...ಜನ ದಡ್ಡರ ತರ ಆಡ್ತಾರೆ ಅಂತ ಕೇಳಿದ್ದೆ...ಆದ್ರೆ..ನೋಡಿದ್ದು ಇದೆ ಫಸ್ಟ್...



Thursday, January 14, 2010

ಅವರು ಸತ್ಹಿದು ಅವರಿಗೆ ಒಳ್ಳೆಯದಾಯಿತು

ಆಫೀಸ್ ಗೆ ಬಂದು ಸಿಸ್ಟಮ್ ಓಪನ್ ಮಾಡಿ ಮೇಲ್ ಚೆಕ್ ಮಾಡಿ ಆಯಿತು. ಕೈ ತುಂಬಾ ಕೆಲಸ ಏನು ಇರ್ಲಿಲ್ಲಾ. ಸರಿ ಕ್ಯಾಂಟೀನ್ ಗೆ ಹೋಗಿ ಒಂದು ಕಪ್ ಕಾಫಿ ತಗೊಂಡು, ಕೊನೆ ಟೇಬಲ್ ಗೆ ಹೋಗಿ ಕುತ್ಕೊಂಡು ಕಾಫಿ ನ ಆಸ್ವಾದಿಸಲು ಶುರು ಮಾಡಿದೆ. ಕಾಫಿ ಕುಡಿದ ಮೇಲೆ ಏನು ಮಾಡದು..ಸರಿ...ಫೋನ್ ಕೈ ಗೆ ತಗೊಂಡು ನಂ ಡೆಲ್ಲಿ ದೋಸ್ತ್ ಗಣೇಶ್ ಗೆ ಕಾಲ್ ಮಾಡ್ದೆ.. ಶಶಿ : ಏನ್ ಮಗ...ಸಮಾಚಾರ..ಏನು ಮಾಡ್ತಾ ಇದ್ದೀಯ.. ಗಣೇಶ : ಏನು ಇಲ್ಲ ಆಫೀಸ್ ಗೆ ಬಂದೆ...ಏನು ಕೆಲಸ ಇಲ್ಲ ..ಸುಮ್ನೆ ಹಂಗೆ ಕುಳ್ತ್ಹಿದೆ...ಮತ್ತೆ ನಿಂದು ಏನು ಸಮಾಚಾರ.. ಶಶಿ : ನನದು ಏನು ಇಲ್ಲ ಮಗ...ಮಾಮೂಲಿ..ಯಾಕೋ ಇಲ್ಲಿ ಎಲ್ಲ ಸರಿ ಇದೆ..ಆದ್ರೆ ಕೆಲಸ ನೆ ಇಲ್ಲ ...ಮತ್ತೆ ನಾಳೆ ..ವೀಕೆಂಡ್ ಪ್ಲಾನ್ ಏನು..? ಗಣೇಶ : ನಾಳೆ ಊರಿಗೆ ಹೊರಟೆ...ಟ್ರೈನ್ ಟಿಕೆಟ್ ಬುಕ್ ಬುಕ್ ಆಯಿತು..ಡೆಲ್ಲಿ ಸ್ಟೇಷನ್ ಇಂದ ಪಾಟ್ನಾ ಗೆ ಸೀದಾ ಟಿಕೆಟ್ ಸಿಕಿಲ್ಲಾ ...ಕ್ಯಾಲ್ಚುತ್ತ ಗೆ ಹೋಗಿ ಅಲ್ಲಿಂದ ಹೌರ ಸ್ಟೇಷನ್ ಇಂದ ಮತ್ತೆ ಪಾಟ್ನಾ ಟ್ರೈನ್ ಕ್ಯಾಚ್ ಮಾಡಬೇಕು... ಶಶಿ: ಯಾಕೋ ...ಇಂದಿದಂಗೆ ಊರಿಗೆ ಹೊರಟೆ...ನ್ಯೂ ಇಯರ್ ಅಂತ ನ.. ? ಗಣೇಶ: ಇಲ್ಲ..ನಮ್ಮ ಸಂಬಂದಿಕರು ಒಬ್ರು ಮೊನ್ನೆ ಸತ್ತು ಹೋದರು...ಅವರ ತಿಥಿ ಇದೆ..ನಾನು ಹೋಗ್ಬೇಕು... ಶಶಿ: ಯಾರೋ ಅದು...ಮೊನ್ನೆ ಕಾಲ್ ಮಾಡಿದಾಗ ಏನು ಹೇಳಲೇ ಇಲ್ಲ...ಈಗ ಹೇಳ್ತಾ ಇದ್ದೀಯ ಗಣೇಶ: ಅದು ಹೇಳುವಂತ ವಿಷಯ ಏನು ಇಲ್ಲ ಬಿಡು...ಯಾಕೆ ಅಂದ್ರೆ...ಅವರು ಅಂತ ಹೇಳ್ಕೊವಥ ವ್ಯಕ್ತಿ ಏನು ಅಲ್ಲ. ಶಶಿ: ಯಾರೋ ಅದು ? ಗಣೇಶ್ : ಅವರು ..ನಮ್ ತಂದೆ ಇದ್ದರಲ್ಲ ಅವರ ತಮ್ಮ..ನಮ್ ತಂದೆ ಗೆ ೧ ತಮ್ಮ ..೧ ಅಣ್ಣ ಇದ್ದಾರೆ...ಈಗ ಸತ್ಹವರು ಏನು ಕೆಲಸ ಮಾಡ್ತಾ ಇರಿಲ್ಲ..ಅವರು ಒಂಥರಾ ಮೆಂಟಲ್ ಪಾರ್ಟಿ..ಅವರು ಮದ್ವೆ ನೆ ಆಗಿರಲಿಲ್ಲ .. ಶಶಿ: ಮತ್ತೆ ಯಾರು ನೋಡಿಕೊಳುತ ಇದ್ರೂ..ಪಾಪ ಅಲ್ವಾ ? ಗಣೇಶ್: ಪಾಪ ಗೀಪ ಏನು ಇಲ್ಲ. ನಮ್ ಅಂಕಲ್ ಒಬ್ರು ಪೋಲಿಸ್ ಆಗಿದಾರೆ..ಅವರ ಮನೆಯಲ್ಲಿ ಕೆಲಸದವರು ಈದ್ರು ..ಅವರು ಇವರ ಕೇರ್ ತಗೊಥ ಇದ್ರೂ..ಇನ್ನು ೨ ವರ್ಷ ದಲ್ಲಿ ಅವರು ನಿವೃತಿ ಹೊಂದುತ ಆಗ್ತಾ ಇದ್ದಾರೆ ..ಈಗ ಅವರು ಸತ್ಹಿದು ಅವರಿಗೆ ಒಳ್ಳೆಯದಾತು. ಇಲ್ಲ ಅಂದ್ರೆ ಅವರಿಗೆ ಮುಂದಕ್ಕೆ ತೊಂದರೆ ಆಗ್ತಾತು ಅಲ್ವಾ.. ಶಶಿ: ಲೇ ಏನು ಹಿಂಗೆ ಮಾತು ಅಡ್ಥ ಇದಿದ್ಯಾ ...ತು ನಿನ್ಮನೆ ಕಾಯೇ ಹೋಗ.. ಗಣೇಶ : ಹಂಗಲ್ಲ ಶಶಿ..ನಾನು ಹಿಂಗೆ ಹೇಳ್ದೆ ಅಂತ ನಂಗೆ ಅವರ ಮೇಲೆ ಪ್ರೀತಿ ಇಲ್ಲ ಅಂತ ಅಲ್ಲ್ಲ.ವಾಟ್ ಇಸ್ ಹಸ ಡನ್ ..ಇಟ್ಸ್ ಗುಡ್ ಫಾರ್ ಹಿಂ ಓನ್ಲಿ ಅಸ್ತೆ...ಸರಿ ಮತ್ತೆ ಏನು ವಿಷ್ಯ.ಸಂಬಳ ಜಾಸ್ತಿ ಅಗೋ ಬಾಗೆ ಏನಾದ್ರು ಗೊತ್ಹಾಥ ..? ಶಶಿ: ಇಲ್ಲ ಮಗ...ಏನು ನ್ಯೂಸ್ ಇಲ್ಲ..ಇನ್ನು..ಸರಿ...ಹೋಗಿ ಕೆಲಸ ಮಾಡು..ಮತ್ತೆ ಈವ್ನಿಂಗ್ ಫ್ರೀ ಆದ್ರೆ ಕಾಲ್ ಮದ್ಥಿನೀ..ಇಲ್ಲ ಅಂದ್ರೆ...ನಾಳೆ ಗೆ ಹ್ಯಾಪಿ ಜೌರ್ನಿ..ಬೈ ಗಣೇಶ್ : ಸರಿ..ಬೈ.. " ಅವರು ಸತ್ಹಿದು ಅವರಿಗೆ ಒಳ್ಳೆಯದಾಯಿತು "...ಜನರು ಸತ್ರೆ , ಬೇರೆಯವರಿಗಲ್ಲ ...ಅದು ಅವರಿಗೆ ಒಳ್ಳೆಯದಾಗುತದೆ ಅಂತ ಹೊಸ ವಿಷ್ಯ ಗೊತಾಯ್ತು ಅನ್ನಿ..

Monday, January 4, 2010

My First Post.. :)

Dear All,

This is My First Post.
Really I dont know what to write and how to write. But in future, I would like to share my thoughts,feeling, hapiness & sorrows whatever...whatever...with you guys.
Keep watching this space for more... :)

Yours
Shashi